ಗದ್ಯ ಕಾವ್ಯ ಪ್ರಯೋಗದ ಮೊದಲ ಪೈರುಗಳಿವು ...
1. ಗಿರೀಶ್, ಹಂದಲಗೆರೆ.
ಸ್ಖಲನ
ಈ ಹಾಳುಪ್ರಾಯವೇ ಹೀಗೆ
ಅನ್ನನೀರಿಗಿಂತ ಕಾಮಪ್ರೇಮವನ್ನೇ ಧ್ಯಾನಿಸುತ್ತದೆ
ಕಂಡ ಹೆಣ್ಣುಗಳ ಎದೆಮೇಲೇ ಕಣ್ಣು
ಗಾತ್ರಗಳ ಅಳೆದು ಚಪ್ಪರಿಸುತ್ತದೆ ಮನ
ಯಾವುದೋ ಹೆಣ್ಣಿನ ದ್ವನಿ,ನಗೆ,ಬಳುಕುವ ನಡಿಗೆ
ಜೀಕುವ ಮುಂಗುರುಳು,ಗಲ್ಲ,ಹುಬ್ಬು,ತಗ್ಗು,,,
ರಾತ್ರಿಯ ನಿದ್ದೆಯಒದ್ದು ಚಡ್ಡಿಯ ಹೊದ್ದೆಯಾಗಿಸುತ್ತವೆ
ಸೂಳೆಯರ ಎಡತಾಕಿ ಪುರುಷತ್ವವ ಪರೀಕ್ಷಿಸಿಕೊಳ್ಳುವ ತವಕ
ಸರಿ ರಾತ್ರಿಯಲ್ಲಿ ಕಾಮಕರಗುವಾಗ ಕಿಟಕಿ ಬಾಗಿಲಿಗಳ ಇಣುಕಿಸುತ್ತದೆ
ಕದ್ದುಮುಚ್ಹಿನೋಡಿ ಸವಿದಷ್ಟೂ ನಿಗೂಡವಾಗುವ ಹೆಣ್ಣ
ಬೆತ್ತಲೆಗೊಳಿಸಿ ಸುಖವ ಸೂರೆಮಾಡುವ ಉತ್ಕಟ ಬಯಕೆ
ನಾಯಿ,ಕುರಿ,ಕೋಳಿ,ಹೋರಿಗಳ ಬೇಟಕ್ಕೆ ಕಣ್ಣ್ ಅರಳುತ್ತವೆ
ನಮಗೇಕಿಲ್ಲ ಮುಕ್ತತೆ ?ಎಂದು ಸಮಾಜವನ್ನ ಶಪಿಸುತ್ತದೆ
ಅಫೀಮಿನ ಅಮಲು ಏರುವ ಜವ್ವನೆ
ಪಕ್ಕದಮನೆಯ ಗೃಹಿಣಿ,ಪಾಠ ಹೇಳುವ ಮೇಡಂ,
ಅಕ್ಕರೆಯ ಅಕ್ಕ,ತಂಗಿ,ತಾಯಿಯರ ಎದೆಗಳತಡವಿ,
ಸ್ಕಲಿಸುತ್ತದೆ ಕನಸಿನಲ್ಲಿ!
ಛೇ ಬೇಡವೆ ಕಾಮಕ್ಕೆ ಕಣ್ಣು
ತಪ್ಪು ಪ್ರಾಯದ್ದೋ, ಪ್ರಕೃತಿಯದ್ದೋ?
ಇಟ್ಟ ಹೆಸರು ಈಡಿಪಸ್ ಕಾಂಪ್ಲೆಕ್ಸ್.
ಅನ್ನನೀರಿಗಿಂತ ಕಾಮಪ್ರೇಮವನ್ನೇ ಧ್ಯಾನಿಸುತ್ತದೆ
ಕಂಡ ಹೆಣ್ಣುಗಳ ಎದೆಮೇಲೇ ಕಣ್ಣು
ಗಾತ್ರಗಳ ಅಳೆದು ಚಪ್ಪರಿಸುತ್ತದೆ ಮನ
ಯಾವುದೋ ಹೆಣ್ಣಿನ ದ್ವನಿ,ನಗೆ,ಬಳುಕುವ ನಡಿಗೆ
ಜೀಕುವ ಮುಂಗುರುಳು,ಗಲ್ಲ,ಹುಬ್ಬು,ತಗ್ಗು,,,
ರಾತ್ರಿಯ ನಿದ್ದೆಯಒದ್ದು ಚಡ್ಡಿಯ ಹೊದ್ದೆಯಾಗಿಸುತ್ತವೆ
ಸೂಳೆಯರ ಎಡತಾಕಿ ಪುರುಷತ್ವವ ಪರೀಕ್ಷಿಸಿಕೊಳ್ಳುವ ತವಕ
ಸರಿ ರಾತ್ರಿಯಲ್ಲಿ ಕಾಮಕರಗುವಾಗ ಕಿಟಕಿ ಬಾಗಿಲಿಗಳ ಇಣುಕಿಸುತ್ತದೆ
ಕದ್ದುಮುಚ್ಹಿನೋಡಿ ಸವಿದಷ್ಟೂ ನಿಗೂಡವಾಗುವ ಹೆಣ್ಣ
ಬೆತ್ತಲೆಗೊಳಿಸಿ ಸುಖವ ಸೂರೆಮಾಡುವ ಉತ್ಕಟ ಬಯಕೆ
ನಾಯಿ,ಕುರಿ,ಕೋಳಿ,ಹೋರಿಗಳ ಬೇಟಕ್ಕೆ ಕಣ್ಣ್ ಅರಳುತ್ತವೆ
ನಮಗೇಕಿಲ್ಲ ಮುಕ್ತತೆ ?ಎಂದು ಸಮಾಜವನ್ನ ಶಪಿಸುತ್ತದೆ
ಅಫೀಮಿನ ಅಮಲು ಏರುವ ಜವ್ವನೆ
ಪಕ್ಕದಮನೆಯ ಗೃಹಿಣಿ,ಪಾಠ ಹೇಳುವ ಮೇಡಂ,
ಅಕ್ಕರೆಯ ಅಕ್ಕ,ತಂಗಿ,ತಾಯಿಯರ ಎದೆಗಳತಡವಿ,
ಸ್ಕಲಿಸುತ್ತದೆ ಕನಸಿನಲ್ಲಿ!
ಛೇ ಬೇಡವೆ ಕಾಮಕ್ಕೆ ಕಣ್ಣು
ತಪ್ಪು ಪ್ರಾಯದ್ದೋ, ಪ್ರಕೃತಿಯದ್ದೋ?
ಇಟ್ಟ ಹೆಸರು ಈಡಿಪಸ್ ಕಾಂಪ್ಲೆಕ್ಸ್.
2 . ವಿನಯ್ ಭಾರದ್ವಾಜ್ , ನಂಜನಗೂಡು
ಒಮ್ಮೆ ದಿವಂಗತನಾಗಬೇಕು!
ಬದುಕಿನ ಇಷ್ಟಗಲದ ಅಂಗಳದಲಿ ಹೆಕ್ಕಿದ ಹೂಗಳು, ಅವೆಷ್ಟೋ ಲೆಕ್ಕವಿಲ್ಲ. ಅದರ ಗಂಧ ಮಾತ್ರ ಕನಸಿನಲ್ಲೂ ಸ್ಪಷ್ಟ. ಹೂ ಕಟ್ಟಿದ ಬೆರಳು ಆಯಾಚಿತವಾಗಿ ಗಂಧ ಉಳಿಸಿಕೊಂಡರೆ, ತಾನಾಗಿ ಬಿಡಬಹುದೇನು ಭ್ರಷ್ಟ?! ಸಂಬಂಧಗಳ ತೂಗು ತಕ್ಕಡಿಯ ತೂಗಿದ ಕೈಗಳು ಎಣಿಸಿದರೆ ತಪ್ಪಾದೀತು, ಯಾವುದು ಲಾಭ, ಯಾವುದು ನಷ್ಟ? ನನ್ನದೇ ಪಪ್ರೆಶ್ನೆಗಳಿಗೆ ಅಗ್ನಿಗಾಹುತಿ...ಬದುಕೇನು ತನ್ನ ಪಾವಿತ್ರತೆಯ ಪ್ರೆಶ್ನೆಯೇ ಅಥವಾ ಪಾತಿವ್ರತೆಯ....? ಅಥವಾ ಬದುಕಿನ ತೀವ್ರತೆಯ! ಇಂತಹ ಉತ್ಕಟತೆಯಲಿ ತನ್ನ ಸುತ್ತ ತಾನೇ ಗೀರೆಳೆದುಕೊಂಡು, ಗೆರೆ ಮೀರಿ ಗಡಿಪಾರಾಗಿ ಬಿಡುವುದು.... ಅಲ್ಲಿ ಗುಡಿಗಳಿಲ್ಲ, ಸ್ಥಂಭಗಳಿಲ್ಲ, ಲಾಂಛನಗಳ ಸೋಗಿಲ್ಲ. ಅಲ್ಲೊಂದು ಅಸ್ತಿತ್ವವ ಕಂಡುಕೊಂಡ ಮೇಲೆ, ಅದನೂ ಮೀರುವ ಹಪಹಪಿ. ಒಳಗಿರುವ ಜ್ವಾಲೆ ಸದಾ ಉದ್ವಿಗ್ನ.
ಈಗ ತನ್ನ ಮಾನವತೆಯ ಪ್ರೆಶ್ನೆ. ತಾನೇನು ದೈವಾಂಶನೋ, ಅಥವ ರಕ್ಕಸನೋ? ಸಜಾತಿಯೂ ಅಲ್ಲದ ವಿಜಾತಿಯೂ ಅಲ್ಲದ ಹಾಗೆ... ಮೂಲದಲ್ಲಿ ತನ್ನ ಮಾನವತೆಯೇ ಕಳೆದಿದೆಯಲ್ಲ. ಹುಡುಕುವ ಹಾದಿಯಲ್ಲಿ ಪುನಃ ರೂಪಾಂತರಗೊಂಡು ಮತ್ತೇನೋ ಆಗಿ ಬಿಡಬೇಕೆಂಬ ತುಡಿತ! ರೂಪಾಂತರವೂ, ನಿದ್ರೆ, ಆಹಾರ, ಮಿಥುನದಷ್ಟೇ ಸಹಜವೇ...! ಇಂತಹ ಸ್ಥಿತ್ಯಂತರಗಳ ಮೀರಲೋಸುಗವಾದರೂ ದಿವಂಗತನಾಗಬೇಕು..ಒಮ್ಮೆ ದಿವಂಗತನಾಗಬೇಕು!"
3. ಪ್ರವರ, ಕೊಟ್ಟೂರು.
ಜೀಕುವ ಮುಂಗುರುಳು
ಮುಂಗುರಳನ್ನು ಅದೆಷ್ಟು ಹೊತ್ತಿನಿಂದ ತಿರುವುತ್ತಲೇ ಇದ್ದೀಯಲ್ಲ,
ಕೆನ್ನೆ ಸವರಿ ಛೇಡಿಸುತಿದ್ದ ಅದನ್ನು ಹಾಗೇ ಇರಲು ಬಿಡು, ನಾನು ಮುಟ್ಟದ ಹೊರತು ಕೆಂಪೇರಬಾರದು;
ಬಳ್ಳಿಯುಂಗುರ ಹೀಗೆ ನಿನ್ನ ಮುಂಗುರುಳಂತೆ ಬಳುಕುತ್ತದೆ, ಬಳಸಿ ನಿಂತರೆ ನಾಚಿಕೆಗೆ ಮೇಲೆ ಪುಟಿಯುತ್ತದೆ
ಮಳೆ, ಧೂಳು, ಸಣ್ಣಗಿನ ಸುಳಿಗಾಳಿ ಎಲ್ಲವೂ ಅದರೊಳಗೆ ಗಾಢವಾಗಿ ಧಾನಿಸುತ್ತಾ ಕೂರುತ್ತವೆ
ಜಾರುವಾಟವಾಡುತ್ತವೆ ಜಾರು ಸೊಂಟದ ಮೇಲೆ ಬೆರಳಾಡಿಸಿದಂತೆ.
ಎದೆಯುಬ್ಬಿಸಿ ಜೋರಾಗಿ ಉಸುರುವಾಗ ಚಂಗನೆ ಹಾರಿ ಜೀಕುತ್ತದೆ ಒಮ್ಮೆ ಹಿಂದಕ್ಕೂ, ಇನ್ನೊಮ್ಮೆ ಮುಂದಕ್ಕೂ ಜೋಕಾಲಿ;
ನಿನ್ನ ಅರ್ಧ ಕಣ್ಣನ್ನು ಮುಚ್ಚಿ ತೂಗಿ ತೊನೆಯುವ ಆ ಮುಂಗುರುಳದೇ ಜಾದೂ
ಅದೆಷ್ಟು ಕಣ್ಣುಗಳು ನಿನ್ನ ಮೇಲೆ ಸುಳಿದಾಡುತ್ತಿವೆ, ಮೊದಲು ಲಟಿಕೆ ಮುರಿದು ದೃಷ್ಠಿ ತೆಗಿಸಬೇಕು;
ಹಾಗೆ ನೇವರಿಸದೇ ಬಿಡು ಹುಡುಗಿ ನಿನ್ನ ಮತ್ತೆ ಮತ್ತೆ ನೋಡಬೇಕು.
4. ಪವನ್ ಪಾರುಪತ್ತೇದಾರ. ಬೆಂಗಳೂರು
ಒಂದು ಸ್ವಗತ
ನಂದು ಕೂಡ ಮನಸೇ ಅಲ್ಲವೇ
ಅಂದು ನಿನ್ನಕ್ಕ ಎಂದು ಗೊತ್ತಿಲ್ಲದೇ ಸೂಪರ್ ಫಿಗರ್ ಎಂದಿದ್ದೆ
ಅದಕ್ಕೆ ಲಾಲ್ ಭಾಗಿನ ಬಿದಿರ ಪೊದೆಯಲ್ಲಿ ಎಷ್ಟು ಗಿಲ್ಲಿದ್ದೆ
ಕೈಮೇಲೆ ಇಂದಿಗೂ ಅದೇ ಗಾಯದ ಗುರುತು
ಮೊನ್ನೆ ಹೆಣ್ಣಿನ ಕಡೆಯವರು ಕೇಳ್ದಾಗ ಎಣ್ಣೆ ಹಾರಿದ್ದೆಂದೆ\
ಹೌದು ಪ್ರೀತಿಯಲಿ ಕಾದ ಪ್ರೇಮದೆಣ್ಣೆ ಹಾರಿದ್ದು
ನನ್ನ ನೋವನ್ನೆಲ್ಲಾ ನಿನ್ನ ಸುಖವಾಗಿಸಿಕೊಂಡಿದ್ದೆ
ನಿನ್ನುಗುರು ನನ್ ಚರ್ಮ ಹರಿದು ನೆತ್ತರಿಳಿಸುತಿದ್ದಾಗ ನನ್ನವಳ ನೋವ ಮರೆಸು ಎಂದಿದ್ದೆ
ಪ್ರೇಮದೆಣ್ಣೆಯ ಕಾವು ಹೆಚ್ಚಾಗಿ ಇದ್ದಾಗ,
ಒದ್ದು ಹೋದೆ ನನ್ನ ಶವದಂತೆ ಮರೆತು
ಈಗ ನೀ ಇರುವ ದೇಶ ಯಾವಾನಿಗೊತ್ತು
ಕೈ ಮೇಲೆ ಗಿಲ್ಲುತಿದ್ದೋಳು ಹೃದಯಾನು ಗಿಲ್ಲಿ ಓಡಿಹೋದ್ಯಲ್ಲೇ
ನಿದ್ದೆ ಮಾಡೋವಾಗ ಮೋಹಿನಿಯು ಬಂದಂಗೆ ನನ್ನೆನಪು ಬಂದಿಲ್ವ ಯಾವತ್ತು ನಿಂಗೆ
ನಂದು ಕೂಡ ಮನಸೇ ಅಲ್ಲವೇ
5. ಪ್ರಶಾಂತ್ ಜೋಷಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ